ಕನ್ನಡ ದೇಶಭಕ್ತಿಗೀತೆಗಳು — ರಾಷ್ಟ್ರಭಾವನೆಯ ಶ್ರವ್ಯ ಅಭಿವ್ಯಕ್ತಿ

1. ದೇಶಭಕ್ತಿ ಗೀತೆ ಸುಲಭವಾಗಿ ಹಾಡಿ | Desha Bhakti Geete Kannada | Indipendens Day Song, Song :ನಗುತಲಿರಲಿ ಭಾರತ Singer : Soumya Manjunath, Lyrics : Dr Shrishail Madannavar, Music Director : Raju Emmiganur
ನಗುತಲಿರಲಿ ಭಾರತ
ನನ್ನ ದೇಶದ ಕೀರ್ತಿ ಪತಾಕೆ
ಹಾರುತಿರಲಿ ಮೇಲಕೆ:
ಮನುಜರೊಳಿತಿಗೆ ತನ್ನ ಕಾಣಿಕೆ
ನೀಡುತಿರಲಿ ವಿಶ್ವಕೆ...
ಪುಣ್ಯ ಭೂಮಿಯ ಮಣ್ಣು ತೀಡುವೆ
ನನ್ನ ಹಣೆಯ ತಿಲಕಕೆ:
ಪ್ರೀತಿ ಪ್ರೇಮದಿ ಪ್ರಾಣ ನೀಡುವೆ
ಜನುಮ ಕೊಟ್ಟ ದೇಶಕೆ ll1ll
ಛಲವು ಬಲವು ತುಂಬಿ ಹರಿಯಲಿ
ಸ್ವಾಭಿಮಾನದ ಚರಿತಕೆ:
ಜಾತಿ ಮತವು ಕೊಚ್ಚಿ ಹೋಗಲಿ
ದೇಶ ಭಕ್ತಿಯ ರಭಸಕೆ ll2ll
ಭರತ ಕುಲಕೆ ಗೆಲುವು ಬಯಸುತ
ಮಿಡಿದು ನಡೆವೆ ಅವಿರತ:
ಸೂರ್ಯ ಚಂದ್ರ ಇರುವವರೆಗೂ
ನಗುತಲಿರಲಿ ಭಾರತ ll3ll
---- ಡಾ. ಶ್ರೀಶೈಲ ಮಾದಣ್ಣವರ
2. ಓ ನನ್ನ ದೇಶ ಬಾಂದವರೇ...
ಓ ನನ್ನ ದೇಶ ಬಾಂಧವರೇ
ಕಣ್ಣೀರ ಕಥೆಯಿದು ಕೇಳಿ
ಈ ದೇಶಕಾಗಿ ಮಾಡಿದಾ
ವೀರ ಯೋಧರಾ ಕಥೆ ಕೇಳಿ
ಓ ನನ್ನ ದೇಶ ಬಾಂಧವರೇ
ಕಣ್ಣೀರ ಕಥೆಯಿದು ಕೇಳಿ
ಈ ದೇಶಕಾಗಿ ಮಡಿದಾ
ವೀರ ಯೋಧರಾ ಕಥೆ ಕೇಳಿ
ಹಿಮಾಲಯವೂ ಭುಗಿಲೇಳಲು
ಸ್ವಾತಂತ್ರ್ಯಕ್ಕೆ ಭಯವಾ ತರಲು
ಕೊನೆವರೆಗೂ ಹೋರಾಡುತಲಿ
ಕೊನೆವರೆಗೂ ಹೋರಾಡುತಲಿ
ಹೆಣವಾಗಿ ಉರುಳಿದರಲ್ಲಿ
ಭೂ ತಾಯಿಯ ಋಣ ತೀರಿಸುತ
ಕಣ್ಮುಚ್ಚಿ ಅಮರರೂ ಆಗಿ
ಈ ದೇಶಕಾಗಿ ಮಡಿದಾ
ವೀರ ಯೋಧರಾ ಕಥೆ ಕೇಳಿ
ದೇಶ ಆಚರಿಸಲು ದೀಪಾವಳಿ
ಗಡಿಯಾಚೆ ರಕ್ತದ ಓಕುಳಿ
ಮನೆಯಲ್ಲ ಸಂತಸವಿರಲು
ಮನೆಯೆಲ್ಲ ನಲಿಯುತಲಿರಲು
ಅಲ್ಲವರಿಗೆ ಮರಣದ ತೊಟ್ಟಿಲು
ವೀರ ಮರಣ ವಪ್ಪಿದ ಸೈನ್ಯಕೆ
ಅಶ್ರು ತರ್ಪಣ ನೀಡಿ ಜನರೇ
ಈ ದೇಶಕಾಗಿ ಮಡಿದಾ
ವೀರ ಯೋಧರಾ ಕಥೆ ಕೇಳಿ
ಕುಲ ಜಾತಿಗಳೆಲ್ಲವೂ ಮರೆತು
ಭಾಷೆ ಪ್ರಾಂತ್ಯದ ಭೇದವ ತೊರೆದು
ಕುಲ ಜಾತಿಗಳೆಲ್ಲವೂ ಮರೆತು
ಭಾಷೆ ಪ್ರಾಂತ್ಯದ ಭೇದವ ತೊರೆದು
ಗಡಿ ನೆಲದೀ ಮಡಿದವರೆಲ್ಲಾ..
ಗಡಿ ನೆಲದೀ ಮಡಿದವರೆಲ್ಲಾ..
ವೀರ ಧೀರ ಭಾರತ ವಾಸಿ
ಮಳೆ ಗರಿಯುತ ರಕ್ತವು ಸಿಡಿದು,
ಸಾರಿ ಹೇಳಿತು ಭಾರತೀಯರೆಂದು
ಈ ದೇಶಕಾಗಿ ಮಡಿದಾ
ವೀರ ಯೋಧರಾ ಕಥೆ ಕೇಳಿ
ಗಾಯ ರಕ್ತವು ಆವರಿಸಿದರು
ವೈರಿ ಮುಗಿಸಲು ಮುಂದೂಡಿದರು
ಎದುರಾದ ವೈರಿಯ ಮುಗಿಸಿ
ತಾಯಿ ಮಡಿಲಲಿ ಬಸವಳಿದಿರಲು
ಕೊನೆ ಉಸಿರು ತಡೆಯಿಡಿದಿರಲೂ...
ಕೊನೆ ಉಸಿರು ತಡೆಯಿಡಿದಿರಲು,
ಕೂಗಿ ಹೇಳಿದರು ಮಾತೊಂದ
ಕೊನೆ ಉಸಿರು ತಡೆಯಿಡಿದಿರಲು,
ಕೂಗಿ ಹೇಳಿದರು ಮಾತೊಂದ,
ಸುಖವಾಗಿರಿ ದೇಶದ ಜನರೇ..
ಸುಖವಾಗಿರಿ ನಾಡಿನ ಜನರೇ..
ಎಂದು ಹೇಳುತ ಕಣ್ಮುಚ್ಚಿದರು..
ಎಂದು ಹೇಳುತ ಕಣ್ಮುಚ್ಚಿದರು..
ಮರೆಯಾದರು ಮನದಲಿ ಉಳಿದು
ಬಲಿದಾನ ತ್ಯಾಗವ ಮೆರೆದು
ಈ ದೇಶಕಾಗಿ ಮಾಡಿದಾ
ವೀರ ಯೋಧರಾ ಕಥೆ ಕೇಳಿ
ಓ ನನ್ನ ದೇಶ ಬಾಂಧವರೇ
ಕಣ್ಣೀರ ಕಥೆಯಿದು ಕೇಳಿ
ಈ ದೇಶಕಾಗಿ ಮಡಿದಾ
ವೀರ ಯೋಧರಾ ಕಥೆ ಕೇಳಿ
ಜಯ ಭಾರತ, ಜಯ ಭಾರತ ಸೇನಾ
ಜಯ ಭಾರತ, ಜಯ ಭಾರತ ಸೇನಾ
ಜಯ ಭಾರತ, ಜಯ ಭಾರತ, ಜಯ ಭಾರತ
3. "ನಾವೆಲ್ಲ ಭಾರತೀಯರೆಂಬ ಭಾವ ಮೂಡಲಿ" - "Navella Bharatiyaremba Bhava Moodali"
ನಾವೆಲ್ಲ ಭಾರತೀಯರೆಂಬ ಭಾವ ಮೂಡಲಿ
ನಾವೆಲ್ಲ ಮನುಜರೊಂದೆ ಎಂಬ ಭಾವ ಮೂಡಲಿ
ನಮ್ಮಲ್ಲಿ ಭೇದಭಾವ ಪ್ರಭು ದೂರವಾಗಲಿ.//2//
ಒಂದು ತೋಟದಲ್ಲಿ ಹಲವು ಬಣ್ಣ ಬಣ್ಣದ ಹೂವುಗಳು
ಅದರಂತೆ ನಮ್ಮ ದೇಶದಲ್ಲಿ ಹಲವು ಮತಗಳು
ಆ ಹೂಗಳಂತೆ ಮತಗಳು ಮಕರಂದ ಬೀರಲಿ
ಆ ಹೂಗಳಂತೆ ಮತಗಳು ಸದ್ಭಾವ ಬೀರಲಿ
ನಮ್ಮಲ್ಲಿ ಭೇದ ಭಾವ ಪ್ರಭು ದೂರವಾಗಲಿ.
ನಾವು ಮನೆಯ ಕಟ್ಟುವಾಗ ಭೂಮಿ ಜಾತಿ ಕೇಳಿತೆ
ನಾವು ಶ್ವಾಸ ಎಳೆಯುವಾಗ ಗಾಳಿ ಕುಲವ ಕೇಳಿತೆ //2//
ಈ ಸೃಷ್ಟಿಯಲ್ಲಿ ಸರ್ವರೂ ಸಮನಾಗಿ ಬಾಳಲಿ
ನಮ್ಮಲ್ಲಿ ಭೇದಭಾವ ಪ್ರಭು ದೂರವಾಗಲಿ.
ಮಣ್ಣಿನಿಂದಾದ ಆದ ಮಡಕೆ ಮಣ್ಣಿಗನ್ಯವೇ
ಚಿನ್ನದಿಂದ ಆದ ಒಡವೆ ಚಿನ್ನಗನ್ಯವೇ//2//
ನಿನ್ನಿಂದ ಆದ ಜೀವರು ನಿನ್ನಂತೆ ಕಾಣಲಿ
ನಮ್ಮಲ್ಲಿ ಭೇದ ಭಾವ ಪ್ರಭು ದೂರವಾಗಲಿ.
ದಯವೇ ಧರ್ಮವೆಂದು ಸಾರಿದಂತ ನಾಡಿದು
ಜಗಕ್ಕೆ ಶಾಂತಿ ಪಾಠ ಹೇಳಿದಂತ ನಾಡಿದು//2//
ಈ ನಾಡಿನಲ್ಲಿ ಶಾಂತಿಯು ಸ್ಥಿರವಾಗಿ ನೆಲಸಲಿ
ನಮ್ಮಲ್ಲಿ ಭೇದ ಭಾವ ಪ್ರಭು ದೂರವಾಗಲಿ.
ಆ ಸೂರ್ಯನಂತೆ ಸಂತರು ಜಗ ಬೆಳಗಿ ಹೋದರು
ಆ ವರುಣನಂತೆ ಜ್ಞಾನವನ್ನು ಸುರಿದು ಹೋದರು
ಗುರುಬಸವ ನಿಮ್ಮ ಬೋಧೆ ಮನದಲ್ಲಿ ನಿಲ್ಲಲಿ
ಗುರುಬಸವ ನಿಮ್ಮ ಬೋಧೆ ಜನರಲ್ಲಿ ನಿಲ್ಲಲಿ
ನಮ್ಮಲ್ಲಿ ಬೇಧಭಾವ ಪ್ರಭು ದೂರವಾಗಲಿ.
ನಾವೆಲ್ಲ ಭಾರತೀಯರೆಂಬ ಭಾವ ಮೂಡಲಿ
ನಾವೆಲ್ಲ ಒಂದೇ ಎಂಬ ಭಾವ ಮೂಡಲಿ
ನಮ್ಮಲ್ಲಿ ಭೇದಭಾವ ಪ್ರಭು ದೂರವಾಗಲಿ.//2//
4. Onde Onde Navellaru | ನಾವೆಲ್ಲರೂ ಒಂದೇ | Kannada Deshabhakti geete | Kannada Patriotic Song
ಒಂದೇ ಒಂದೇ ನಾವೆಲ್ಲರೂ ಒಂದೇ
ಈ ದೇಶದಲೊಳು ಎಲ್ಲಿದ್ದರು ಭಾರತ ನಮಗೊಂದೇ ।।
ಹಲವು ಕೊಂಬೆಗಳು ಚಾಚಿಕೊಂಡರು, ಮರಕ್ಕೆ ಬುಡವೊಂದೇ ।
ಸಾವಿರ ನದಿಗಳು ಹೇಗೆ ಹರಿದರು, ಕೂಡುವ ಕಡಲೊಂದೇ ।
ಇರುಳಿಗೆ ಸಾಸಿರ ಚಿಕ್ಕೆಗಳಿದ್ದರು, ಹಗಲಿಗೆ ರವಿ ಒಂದೇ ।
ಅಗಣಿತ ಗ್ರಹ ಮಂಡಲಗಳ ಚಲನೆಗೆ ಆಕಾಶವು ಒಂದೇ ।।
ನೂರು ಬಗೆಯ ಆರಾಧನೆ ಇದ್ದರು, ದೇವರೆಲ್ಲರಿಗೂ ಒಂದೇ ।
ಹಲವು ಬಣ್ಣಗಳ ಹಸುಗಳು ಕರೆಯುವ ಹಾಲಿನ ಬಿಳುಪೊಂದೇ ।
ನಡೆನುಡಿ ಭೇದಗಳೆಷ್ಟೇ ಇದ್ದರೂ ಬದುಕುವ ಜನರೊಂದೇ ।
ನೆರಳು ಬೆಳಕುಗಳ ರೆಕ್ಕೆಯ ಬಿಚ್ಚುತ ಹಾರಾಡುವ ಧ್ವಜವೊಂದೇ ।।
5. ಜೋಗದ ಸಿರಿ ಬೆಳಕಿನಲ್ಲ- Jogada Siri Belakinalli Video Song | K S Nissar Ahmed | Mysore Ananthaswamy | BVM Ganesh Reddy |Folkೀ
🎬 ಪಾತ್ರ ನಿರ್ವಹಣೆ: ಶ್ರುತಿ ಆರ್. ಮುನಿರಾಜು, ಸಮೀಕ್ಷಾ ರೆಡ್ಡಿ, ಭಾನ್ವಿಕಾ, ಹರ್ಷಿಣಿ ಎಸ್., ಧನ್ಯಾ ಎನ್., ಶ್ರಯಾ ಎಸ್., ಸಿಂಚನಾ ಸಿ., ನಿಹಾರಿಕಾ ಮಂಡಪತಿ.
ಈ ಹಾಡು "ಬಾರಿಸು ಕನ್ನಡ ದಿಂಡಿಮವಾ" ಕಾರ್ಯಕ್ರಮದ ಅಂಗವಾಗಿ ಬಿಡುಗಡೆಗೊಂಡಿದ್ದು, ಲಹರಿ ಮ್ಯೂಸಿಕ್ ಅವರ ಸಂಗೀತ ಲೇಬಲ್ನಡಿ ಹೊರಬಂದಿದೆ. ಕನ್ನಡ ನಾಡಿನ ಪ್ರತಿ ಹೃದಯದಲ್ಲಿ ಹೆಮ್ಮೆಯಿಂದ ಮೊಳಗುವ ಈ ಗೀತೆ, ನಾಡಿನ ಅಸ್ತಿತ್ವದ ಗಾನವಾಗಿದೆ. 🇮🇳🎶
ಜೋಗದ ಸಿರಿ ಬೆಳಕಿನಲ್ಲಿ ತುಂಗೆಯ ತೆನೆ ಬಳುಕಿನಲ್ಲಿ,
ಸಹ್ಯಾದ್ರಿಯ ಲೋಹದದಿರ ಉತ್ತುಂಗದ ನಿಲುಕಿನಲ್ಲಿ,
ನಿತ್ಯ ಹರಿದ್ವರ್ಣವನದ ತೇಗ ಗಂಧ ತರುಗಳಲ್ಲಿ
ನಿತ್ಯೋತ್ಸವ, ತಾಯಿ, ನಿತ್ಯೋತ್ಸವ ನಿನಗೆ...
ಇತಿಹಾಸದ ಹಿಮದಲ್ಲಿನ ಸಿಂಹಾಸನ ಮಾಲೆಯಲ್ಲಿ,
ಗತ ಸಾಹಸ ಸಾರುತಿರುವ ಶಾಸನಗಳ ಸಾಲಿನಲ್ಲಿ,
ಓಲೆ ಗರಿಯ ಸಿರಿಗಳಲ್ಲಿ, ದೇಗುಲಗಳ ಭಿತ್ತಿಗಳಲಿ
ನಿತ್ಯೋತ್ಸವ ತಾಯಿ, ನಿತ್ಯೋತ್ಸವ ನಿನಗೆ....
ಹಲವೆನ್ನದ ಹಿರಿಮೆಯೆ, ಕುಲವೆನ್ನದ ಗರಿಮೆಯೆ,
ಸದ್ವಿಕಾಸಶೀಲ ನುಡಿಯ ಲೋಕಾವೃತ ಸೀಮೆಯೆ,
ಈ ವತ್ಸರ ನಿರ್ಮತ್ಸರ ಮನದುದಾರ ಮಹಿಮೆಯೆ
ನಿತ್ಯೋತ್ಸವ, ತಾಯಿ, ನಿತ್ಯೋತ್ಸವ ನಿನಗೆ
6. ನನ್ನ ದೇಶ ನನ್ನ ಉಸಿರು- Kannada patriotic song: nanna desha nanna usiru | Indipendenceday song|
🎵 ಕನ್ನಡ ದೇಶ ಭಕ್ತಿಗೀತೆ - ನನ್ನ ದೇಶ ನನ್ನ ಉಸಿರು , ಸ್ವತಂತ್ರ ದಿನಚರಣೆ ಅಂಗವಾಗಿ ಈ ಸುಂದರ ಹಾಡು ದೇಶಭಕ್ತಿಗೀತೆ| ನನ್ನ ದೇಶ ನನ್ನಉಸಿರು ನನ್ನಪ್ರಾಣ ಭಾರತ|Patriotic Song in Kannada|Indipendenceday song|Lyrics : Bhimesh Talawar, Nanna Desha nanna usiru Nanna praana Bharata Shanti Saha balve vishwakella saaruta, llli Omme janma taalalu Punyavo Dhanyavo Bharata Bharata Bharata Ennalu Jeevana Saarthaka. Helu neenu hemmeyinda Haaduta Vishwakella Guruvu Nanna Bharataanother song
ನನ್ನ ದೇಶ ನನ್ನ ಉಸಿರು ನನ್ನ ಪ್ರಾಣ ಭಾರತ
ಶಾಂತಿ ಸಹಬಾಳ್ವೆಯು ವಿಶ್ವಕ್ಕೆಲ್ಲ ಸಾರುತ llPll
ಇಲ್ಲಿ ಜನ್ಮ ತಾಳಲು ಪುಣ್ಯವೋ ಧನ್ಯವೋ
ಭಾರತ ಎನ್ನಲು ಜೀವನವೇ ಸಾರ್ಥಕ ll1ll
ಹೇಳು ನೀನು ಹೆಮ್ಮೆಯಿಂದ ಹಾಡುತ್ತ ಭಾರತ
ವಿಶ್ವಕ್ಕೆಲ್ಲ ಗುರುವು ನನ್ನ ಹೆಮ್ಮೆಯ ಭಾರತ ll2ll
7. ಧವಳ ಹಿಮದ ಗಿರಿಯ ಮೇಲೆ ಅರುಣ ಧ್ವಜವ ಹಾರಿಸು- dhavaLa himada giriya mEle
🎵 ಕನ್ನಡ ದೇಶ ಭಕ್ತಿಗೀತೆ - ಧವಳ ಹಿಮದ ಗಿರಿಯ ಮೇಲೆ ಅರುಣ ಧ್ವಜವ ಹಾರಿಸಿ ಎಂಬ ಹಾಡು ಭಾರತ ಮತ್ತು ಅದರ ಪ್ರೌಢ ರಾಷ್ಟ್ರಪ್ರತಿಷ್ಠೆಯನ್ನು ಪ್ರಶಂಸುವ ನಾಡಭಕ್ತಿ ಹಾಡಾಗಿದೆ. ಈ ಹಾಡು ದೇಶಭಕ್ತಿ, ಶಾಂತಿ, ಗೌರವ ಮತ್ತು ಭಾರತವನ್ನು ಪ್ರಪಂಚಕ್ಕೆ ಗುರುತಿಸುವ ಮಹತ್ವವನ್ನು ಕೊಂಡಾಡುತ್ತದೆ. ಹಾಡಿನ ಸಾಹಿತ್ಯದಲ್ಲಿ ಭರತ ನಾಡಿನ ಸೌಂದರ್ಯ, ಶಕ್ತಿ, ಹಾಗೂ ನಾಗರಿಕರ ಸಮೃದ್ಧ ಜೀವನದ ಚಿತ್ರಣ ಇದೆ.ಹಾಡಿನ ಪ್ರತಿ ಪದ್ಯವು ರಾಷ್ಟ್ರಭಕ್ತಿ, ಶಾಂತಿ, ಧೈರ್ಯ, ಮತ್ತು ಧ್ಯೇಯ ಸಾಧನೆಗೆ ಒತ್ತು ನೀಡುತ್ತದೆ. ಸಂಗೀತದ ಮೂಲಕ ಶ್ರೋತರಿಗೆ ಪ್ರೇರಣೆಯನ್ನು ನೀಡುವ ಧಾರ್ಮಿಕ ಹಾಗೂ ನಾಡಭಕ್ತಿಯ ಅಂಶಗಳನ್ನೂ ಒಳಗೊಂಡಿದೆ.
ಧವಳ ಹಿಮದ ಗಿರಿಯ ಮೇಲೆ (On the snow-capped mountains), ಅರುಣ ಧ್ವಜ (Tricolor Flag), ವಿಜಯಭೇರಿ (Victory Bugle), ವೀರಗಾನ (Songs of Valor), ದಿವ್ಯಪ್ರಭೆ (Divine Light), ಭಾರತ (India), ರಾಷ್ಟ್ರಭಕ್ತಿ (Patriotism), ಶಾಂತಿ (Peace), ಗೌರವ (Honor)
ಧವಳ ಹಿಮದ ಗಿರಿಯ ಮೇಲೆ ಅರುಣ ಧ್ವಜವ ಹಾರಿಸಿ
ಮುಗಿಲ ಏಣಿ ಏರಿ ನಿಂದು ವಿಜಯಭೇರಿ ಬಾರಿಸಿ ||ಪ||
ಸಿಂಧು ಕಣಿವೆಯೊಡಲಿನಿಂದ ವೀರಗಾನ ಮೊಳಗಲಿ
ಧ್ಯೇಯರವಿಯ ಕಿರಣ ತರುಣರೆದೆಯ ಗುಡಿಯ ಬೆಳಗಲಿ
ಎದ್ದು ನಿಲ್ಲು ಭಾರತ... ದಿವ್ಯಪ್ರಭೆಯ ಬೀರುತ ||೧||
ಮನವ ಹಸಿರುಗೊಳಿಸುತಿಹಳು ಭಾವಗಂಗೆ ಅನುದಿನ
ಇಳೆಯ ಕೊಳೆಯ ತೊಳೆಯುತಿಹಳು ತಾಯಿ ತುಂಗೆ ಕ್ಷಣಕ್ಷಣ
ನೆಲವಿದೆಮ್ಮ ಪಾವನ... ಎನಿತು ಧನ್ಯ ಜೀವನ ||೨||
ನಾಡಗುಡಿಯ ಮೂರು ಕಡೆಯು ಪೊರೆವ ಶಾಂತ ಸಾಗರ
ಹಿಂದು ಜನರ ಹೃದಯವಿಂದು ಕ್ಷಾತ್ರತೇಜದಾಗರ
ಸ್ಫೂರ್ತಿ ಗೌರಿಶಂಕರ... ಕಾಲಯಮನು ಕಿಂಕರ ||೩||
ಅಸುರತನದ ಉಸಿರ ನೀಗಿ ಭೇದಭಾವ ನೀಗುತ
ಸಾಗು ಮುಂದೆ ಮುಂದೆ ಸಾಗು ಮಾತೆಯನ್ನು ಸ್ಮರಿಸುತ
ನಿನಗೆ ಜಯದ ಆರತಿ... ಹರಸು ತಾಯೆ ಭಾರತಿ ||೪||
8. Udayavaagali Song with Lyrics | P Kalinga Rao | Pancham Halibandi | Kannada Patriotic Song
🎵 ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು (Udayavagali Namma Cheluva Kannada Naadu) ಗೀತೆ ಕರ್ನಾಟಕದ ಸಾಂಸ್ಕೃತಿಕ ಹಾಗೂ ರಾಜ್ಯಪರ ಗೀತೆಯಾಗಿದೆ. 1924 ರಲ್ಲಿ ಬೆಳಗಾವಿಯಲ್ಲಿ ನಡೆದ ಕರ್ನಾಟಕ ಏಕೀಕರಣ ಸಮ್ಮೇಳನದಲ್ಲಿ ಮೊದಲ ಬಾರಿಗೆ ಹಾಡಲಾಯಿತು. ಈ ಗೀತೆಯನ್ನು ಕನ್ನಡ ನಾಡಿನ ಏಕೀಕರಣ ಮತ್ತು ಅಸ್ಮಿತೆಯನ್ನು ಸಂಕೇತಿಸುವಂತೆ ಪರಿಗಣಿಸಲಾಗಿದೆ. ಗೀತೆಯನ್ನು ಹುಯಿಲ್ಗೋಲ್ ನಾರಾಯಣರಾಯರು ರಚನೆ ಮಾಡಿದ್ದಾರೆ ಮತ್ತು ಸಂಗೀತ ನಿರ್ದೇಶನ ಪಿ. ಕಲಿಂಗ ರಾವ್ ಅವರು ನೀಡಿದ್ದಾರೆ. ಹಾಡನ್ನು ಪಂಚಂ ಹಲಿಬಂದಿ, ಸುಚೇತನ, ರವಿಶಂಕರ್ ಜಿ.ಎಸ್., ಅರ್ಚನಾ ಉದುಪ, ಸುರೇಖಾ, ಶ್ರೀಕೃಪಾ ಅವರಿಂದ ಗಾಯಕನಾಗಿ ಪ್ರಕಟಿಸಲಾಗಿದೆ. ಲಹರಿ ಮ್ಯೂಸಿಕ್ ಇದಕ್ಕೆ ಸಂಗೀತ ಲೇಬಲ್ ಆಗಿದೆ. ಇದು ಕನ್ನಡಿಗರ ಅಸ್ಮಿತೆ ಮತ್ತು ಸಾಂಸ್ಕೃತಿಕ ಏಕತೆಯನ್ನು ಮೆರೆದಿರುವ ಮಹತ್ವದ ಗೀತೆ.
ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು
ಬದುಕು ಬಲುಹಿನ ನಿಧಿಯು ಸದಭಿಮಾನದ ಗೂಡು || ಪ ||
ರಾಜನ್ಯರಿಪು ಪರಶುರಾಮನಮ್ಮನ ನಾಡು
ಆ ಜಲಧಿಯನೆ ಜಿಗಿದ ಹನುಮನುದಿಸಿದ ನಾಡು
ಓಜೆಯಿಂ ಮೆರೆದರಸುಗಳ ಸಾಹಸದ ಸೂಡು
ತೇಜವನು ನಮಗೀವ ವೀರವೃಂದದ ಬೀಡು
ಲೆಕ್ಕಿಗಮಿತಾಕ್ಷರರು ಬೆಳೆದು ಮೆರೆದಿಹ ನಾಡು
ಜಕ್ಕಣನ ಶಿಲ್ಪ ಕಲೆಯಚ್ಚರಿಯ ಕರುಗೋಡು
ಚೊಕ್ಕ ಮತಗಳ ಸಾರಿದವರಿಗಿದು ನೆಲೆವೀಡು
ಬೊಕ್ಕಸದ ಕಣಜವೈ ವಿದ್ವತ್ತೆಗಳ ಕಾಡು
ಪಾವನೆಯರಾ ಕೃಷ್ಣೆ ಭೀಮೆಯರ ತಾಯ್ನಾಡು
ಕಾವೇರಿ ಗೋದೆಯರು ಮೈದೊಳೆವ ನಲುನಾಡು
ಆವಗಂ ಸ್ಫೂರ್ತಿಸುವ ಕಬ್ಬಿಗರ ನಡೆಮಾಡು
ಕಾವ ಗದುಗಿನ ವೀರನಾರಾಯಣನ ಬೀಡು
