ರಾಜ್ಯದಲ್ಲಿ ಅತಿ ಹೆಚ್ಚು ಮಳೆ ಎಲ್ಲೆಲ್ಲಿ ಬಿದ್ದಿದೆ ಗೊತ್ತಾ.

ಡಿಸಿ ಅವರಿಂದ ಹೊರಡಿಸಲಾದ ಅಧಿಕೃತ ಆದೇಶದ ಪ್ರತಿ.
ಕರ್ನಾಟಕದದ್ಯಂತ ಬೀಳುತ್ತಿರುವ ಅತಿವೃಷ್ಟಿಯಿಂದಾಗಿ ವಿದ್ಯಾರ್ಥಿಗಳಿಗೆ ರಜೆಯನ್ನ ಘೋಷಿಸುವ ಅಧಿಕಾರವನ್ನು ಆ ಜಿಲ್ಲೆಯ ಜಿಲ್ಲಾಧಿಕಾರಿಗಳಿಗೆ ನೀಡಲಾಗಿದೆ ಅದರಂತೆ ದಿನಾಂಕ 25-6-2025 ರಂದು ಬೀಳುತ್ತಿರುವ ನಿರಂತರ ಮಳೆಯ ಪರಿಣಾಮ ವಿದ್ಯಾರ್ಥಿಗಳ ಜೀವಕ್ಕೆ ಆಪತ್ತು ಬರಬಾರದೆಂಬ ಕಾರಣಕ್ಕಾಗಿ ಉತ್ತರ ಕನ್ನಡ ಜಿಲ್ಲೆಯಾದ್ಯಂತ ಬಿದ್ದ ಮಳೆಯ ಆಧಾರದಿಂದ ಮತ್ತು ಶಿಕ್ಷಣಾಧಿಕಾರಿಗಳ ಮನವಿಯ ಮೇರೆಗೆ ಉತ್ತರ ಕನ್ನಡ ಜಿಲ್ಲೆಯ ಘಟ್ಟದ ಮೇಲಿನ ತಾಲೂಕುಗಳಾದ ಜೋಯಿಡಾ ಮತ್ತು ದಾಂಡೇಲಿ ಅಂಗನವಾಡಿ ಪ್ರಾಥಮಿಕ ಶಾಲೆ ಮತ್ತು ಪ್ರೌಢಶಾಲೆಗಳಿಗೆ ತುರ್ತು ರಜೆಯನ್ನ ಘೋಷಿಸಿ ಆದೇಶವನ್ನು ಮಾಡಿರುತ್ತಾರೆ
IMD ಮಾಹಿತಿಯಂತೆ ಬೆಳಗಾವಿ, ಉತ್ತರಕನ್ನಡ, ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಿಗೆ ಆರೇಂಜ್ ಅಲರ್ಟ ಘೋಷಿಸಲಾಗಿದೆ.

ವಿದ್ಯಾರ್ಥಿಗಳು ಯೂನಿಫಾರ್ಮ್ನಲ್ಲಿ ಶಾಲೆಗೆ ತೆರಳುತ್ತಿರುವ ದೃಶ್ಯ
ಕಳೆದ 24 ಗಂಟೆಗಳಲ್ಲಿ ಅಂದರೆ ದಿನಾಂ24-06-2025 ರ 8:30 ರಿಂದ 25-06-2025 ರ ಬೆಳಿಗ್ಗೆ 7:00 ಗಂಟೆ ವರೆಗೆ ದಾಖಲಾದಂತೆ, ಕರ್ನಾಟಕದ ಹಲವು ಭಾಗಗಳಲ್ಲಿ ಭಾರಿ ಮಳೆಯಾಗಿದ್ದು, ಬೆಳಗಾವಿ ಮತ್ತು ಹಾಸನ (ಸಕಲೇಶಪುರ) ಭಾಗಗಳಲ್ಲಿ ಅತಿ ಹೆಚ್ಚು ಮಳೆಯಾಗಿದೆ. ರೈತರು, ಜನತೆ ಮತ್ತು ಅಧಿಕಾರಿಗಳು ಎಚ್ಚರಿಕೆಯಿಂದ ಇರಬೇಕಾದ ಅವಶ್ಯಕತೆ ಇದೆ.
ಅತಿ ಹೆಚ್ಚು ಮಳೆಯಾದ ಟಾಪ್ 5 ಪ್ರದೇಶಗಳು:
- ಬೆಳಗಾವಿ ಖಾನಾಪುರ ಮಂಟುರ್ಗಾ – 182 ಮಿಮೀ
- ಬೆಳಗಾವಿ ಬೆಳಗುಂದಿ – 181.5 ಮಿಮೀ
- ಬೆಳಗಾವಿ ಬಿಜಗಾರ್ನಿ – 181.5 ಮಿಮೀ
- ಹಾಸನ ಸಕಲೇಶಪುರ ಬ್ಯಾಕರವಳ್ಳಿ – 176 ಮಿಮೀ
- ಹಾಸನ ಸಕಲೇಶಪುರ ಹೊಗಧಹಳ್ಳಿ – 176 ಮಿಮೀ
ಅನೇಕ ತಾಲೂಕುಗಳಲ್ಲಿ 100 ಮಿಮೀ ಮಳೆಯನ್ನೂ ಮೀರುವ ಮಳೆಯಾಗಿದೆ:
- ಶಿವಮೊಗ್ಗ ತೀರ್ಥಹಳ್ಳಿ ಹಡಿಗಲ್ಲು – 139.5 ಮಿಮೀ
- ಉತ್ತರ ಕನ್ನಡ ಸಿರ್ಸಿ ನೆಗ್ಗು – 111.5 ಮಿಮೀ
- ಚಿಕ್ಕಮಗಳೂರು ಮುಡಿಗೆರೆ ಕಿರುಗುಂಡ – 105.5 ಮಿಮೀ
- ಶಿವಮೊಗ್ಗ ಹೊಸನಗರೆ ಮೆಲಿನಬೆಸಿಗೆ – 101.5 ಮಿಮೀ
- ಬೆಳಗಾವಿ ಪೀರನವಾಡಿ – 100.5 ಮಿಮೀ
ಎಚ್ಚರಿಕೆ ಮತ್ತು ಮುಂಜಾಗ್ರತಾ ಕ್ರಮ:
ಹದಿಮೂರಕ್ಕೂ ಹೆಚ್ಚು ಪ್ರದೇಶಗಳಲ್ಲಿ 120 ಮಿಮೀ ಗಿಂತಲೂ ಅಧಿಕ ಮಳೆಯಾಗಿರುವುದರಿಂದ ನದಿಗಳಲ್ಲಿ ಪ್ರವಾಹದ ಸಾಧ್ಯತೆ ಇದೆ. ಗ್ರಾಮೀಣ ಪ್ರದೇಶಗಳಲ್ಲಿ ಜಲಾವೃತ್ತ ಹಾಗೂ ರಸ್ತೆ ಸಂಚಾರದಲ್ಲಿ ತೊಂದರೆ ಉಂಟಾಗಬಹುದು.
ಜಿಲ್ಲಾ ಹಾಗೂ ತಾಲೂಕು ಆಡಳಿತಗಳು ಮುಂಜಾಗ್ರತಾ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಲಾಗಿದೆ. ರೈತರು ತಮ್ಮ ಬೆಳೆಗಳಿಗೆ ರಕ್ಷಣೆ ನೀಡಲು ತಕ್ಷಣ ಕ್ರಮ ಕೈಗೊಳ್ಳುವುದು ಸೂಕ್ತ.
ಮಾಹಿತಿ ಮೂಲ: KSNDMC