
- ಜ್ವರವು ದೇಹದ ರೋಗಪ್ರತಿರಕ್ಷಣಾ ವ್ಯವಸ್ಥೆಯ ಸಹಜ ಪ್ರತಿಕ್ರಿಯೆ.
- ಈಗಿನ ಕಾಲದಲ್ಲಿ ಇಂಗ್ಲೀಷ್ ಔಷಧ ತಿಂದು ಅಡ್ಡಪರಿಣಾಮ ಉಂಟಾಗುತ್ತದೆ ಎನ್ನುತ್ತಾರೆ.
- ಮನೆಮದ್ದುಗಳು ಸುರಕ್ಷಿತ, ಸರಳ ಮತ್ತು ಪರಿಣಾಮಕಾರಿ ಪರಿಹಾರಗಳನ್ನು ನೀಡುತ್ತವೆ.
- ಅಡುಗೆಮನೆಯಲ್ಲಿನ ಮನೆಮದ್ದುಗಳು ರಾಸಾಯನಿಕರಹಿತ - ಯಾವುದೇ ಅಡ್ಡಪರಿಣಾಮಗಳಿಲ್ಲ.
- ತೀರಾ ಕಡಿಮೆ ವೆಚ್ಚದಲ್ಲಿಯೇ ಮನೆಯಲ್ಲೇ ಲಭ್ಯವಾದ ಸಾಮಗ್ರಿಗಳು ಇದಕ್ಕೆ ಬೇಕಾಗುತ್ತದೆ.
- ಮನೆಯಲ್ಲಿಯೇ ಪ್ರಯತ್ನಿಸಿ ನಮ್ಮ ಆರೋಗ್ಯ ಉಳಿಸಿಕೊಳ್ಳುವ ಒಂದು ಪ್ರಯತ್ನ...
1. ತುಳಸಿ+ಕಾಳುಮೆಣಸು+ಜೇನುತುಪ್ಪ

ಪರಿಣಾಮ: ಜ್ವರ ಮತ್ತು ಶೀತಕ್ಕೆ ತ್ವರಿತ ಉಪಶಮನ. ತುಳಸಿ ಎಲೆಗಳು ಪ್ರತಿಜೀವಕ(Antibody) ಗುಣಗಳನ್ನು ಹೊಂದಿವೆ.
ವಿಧಾನ:
- 5-6 ತಾಜಾ ತುಳಸಿ ಎಲೆಗಳ ಜಜ್ಜಿ ರಸ ತೆಗೆಯುವುದು.
- 4-5 ಕಾಳುಮೆಣಸು (ಪುಡಿ ಮಾಡಿ).
- 1 ಚಮಚ ಶುದ್ಧ ಜೇನುತುಪ್ಪ.
- ತುಳಸಿ ಎಲೆ ರಸ+ಕಾಳುಮೆಣಸಿನ ಪುಡಿ+ ಜೇನುತುಪ್ಪವನ್ನ ಮಿಶ್ರಣ ಮಾಡಿ ಸಿರಪ್ ತಯಾರಿಸಿ. ಸೇವಿಸಿ
- 1 ಗ್ಲಾಸ್ ಬಿಸಿ ಬಿಸಿನೀರನ್ನು ಚಹಾ ಸೇವಿಸಿದಂತೆ ಕುಡಿಯಿರಿ.
- ಇದನ್ನು ದಿನಕ್ಕೆ 2-3 ಬಾರಿ ಸೇವಿಸಿ. (ಇದಕ್ಕೆ ಬೇಕಾದರೆ ಹಸಿ ಶುಂಠಿ ರಸ+ ಓಮದ ಕಾಳಿನ ಪುಡಿ ಸೇರಿಸಿ ಸೇವಿಸಿದರೆ ಉತ್ತಮ)
ಹೆಚ್ಚಿನ ಮಾಹಿತಿ: ತುಳಸಿ ಎಲೆಗಳು ದೇಹದ ಉಷ್ಣತೆಯನ್ನು ನಿಯಂತ್ರಿಸುತ್ತದೆ ಮತ್ತು ರೋಗ ಪ್ರತಿರಕ್ಷಣಾ ಶಕ್ತಿಯನ್ನು ಹೆಚ್ಚಿಸುತ್ತದೆ. ಜ್ಚರದಿಂದ ಬೇಗನೆ ಗುಣವಾಗಲು ಸಹಾಯ ಮಾಡುತ್ತದೆ. ಇದಕ್ಕೆ
2. ಶುಂಠಿ+ಕಾಳುಮೆಣಸು ಪುಡಿ+ಜೇನುತುಪ್ಪು

ಪರಿಣಾಮ: ದೇಹದ ಉಷ್ಣತೆ ಕಡಿಮೆ ಮಾಡುತ್ತದೆ ಮತ್ತು ರೋಗ ಪ್ರತಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಇದರಿಂದ ದೇಹಾರೋಗ್ಯ ಸುಧಾರಿಸುತ್ತದೆ.
ವಿಧಾನ:
- 1 ಚಮಚ ತಾಜಾ ಶುಂಠಿ ರಸ.
- 1 ಚಮಚ ಶುದ್ಧ ಜೇನುತುಪ್ಪ.
- 1/2 ಚಮಚ ಕಾಳು ಮೆಣಸಿನ ಪುಡಿ
- 1/2 ಗ್ಲಾಸ್ ಬಿಸಿ ನೀರು
- ಎಲ್ಲವನ್ನು ಕಲಸಿ ನಾಲಿಗೆಗೆ ಉಜ್ಜಿ ಸೇವಿಸಿ.
- ಬಿಸಿನೀರನ್ನ ನಿಧಾನವಾಗಿ ಕುಡಿಯಿರಿ
- ದಿನಕ್ಕೆ 3-4 ಬಾರಿ (ಬೆಳಿಗ್ಗೆ ಮತ್ತು ರಾತ್ರಿ) ಎದ್ದ ತಕ್ಷಣ ಮತ್ತು ಮಲಗುವ ಮೊದಲು ಸೇವಿಸಿದರೆ ಪರಿಣಾಮ ಶೀಘ್ರ.
ಅಡಿಟಿಪ್ಪಣಿ: ಶುಂಠಿಯು ದೇಹದಲ್ಲಿನ ವಿಷಕಾರಿ ಪದಾರ್ಥಗಳನ್ನು ಹೊರಹಾಕುತ್ತದೆ ಮತ್ತು ಉರಿಯೂತವನ್ನು ಕಡಿಮೆ ಮಾಡುತ್ತದೆ. ಜ್ವರದ ನೋವನ್ನ ಖಂಡಿತವಾಗಿಯೂ ಕಡಿಮೆ ಮಾಡುತ್ತದೆ.
3. ಕೊತ್ತಂಬರಿ ಬೀಜ+ ಜೀರಿಗೆ+ ಓಮದ ಕಾಳು+ ಕಾಳು ಮೆಣಸು

ಪರಿಣಾಮ: ಕೊತ್ತಂಬರಿಯಲ್ಲಿ ಪಚನಕಾರಕ ವಸ್ತು ಮತ್ತು ಉಷ್ಣ ಶಮನಕಾರಕ ಗುಣವಿದೆ, ಈ ಮೇಲಿನ ವಸ್ತುಗಳು ಜ್ವರದ ತೀವ್ರತೆ ಕಡಿಮೆ ಮಾಡುತ್ತದೆ ಮತ್ತು ದೇಹವನ್ನು ಶೀತಲಗೊಳಿಸುತ್ತದೆ. ದೇಹ ತನ್ನಿಂದ ತಾನೇ ಆರಾಮವಾಗಲು ಸಹಾಯ ಮಾಡುತ್ತದೆ.
ವಿಧಾನ:
- 1 ಚಮಚ ಕೊತ್ತಂಬರಿ ಬೀಜ
- 1ಚಮಚ ಓಮದ (ಅಜವಾನ) ಕಾಳು
- 1 ಚಮಚ ಜೀರಿಗೆ
- 5-6 ಕಾಳು ಮೆಣಸು
- ಮೇಲಿನವೆಲ್ಲವನ್ನು ಪುಡಿ ಮಾಡಿ ನೀರಿನಲ್ಲಿ ನಿಧಾನ ಉರಿಯಲ್ಲಿ ಎರಡು ಗ್ಲಾಸ್ ನೀರನ್ನ ಒಂದು ಗ್ಲಾಸ್ ಆಗುವಷ್ಟು ಕುದಿಸಿ.
- ಅದಕ್ಕೆ ಬೆಲ್ಲ ಮಿಶ್ರಣ ಮಾಡಿ ಕುಡಿಯಬೇಕು
- ಅಥವಾ ಕಲ್ಲು ಸಕ್ಕರೆ ಕಲಸಿ ಸೇವಿಸಬಹುದು
ವೈಜ್ಞಾನಿಕ ಹಿನ್ನೆಲೆ: ಕೊತ್ತಂಬರಿ ಬೀಜಗಳಲ್ಲಿ ಅಂಟಿ-ಇನ್ಫ್ಲಮೇಟರಿ ಗುಣಗಳಿವೆ ಮತ್ತು ದೇಹದ ಉಷ್ಣತೆಯನ್ನು ನಿಯಂತ್ರಿಸುತ್ತದೆ.
4. ಒಣದ್ರಾಕ್ಷಿ

ಪರಿಣಾಮ: ದೇಹದ ಬಲವರ್ಧನೆಗೆ ಸಹಕಾರಿ ಮತ್ತು ಜ್ವರದ ಸಮಯದಲ್ಲಿ ಸುಸ್ತಾಗುವ ದೇಹಕ್ಕೆ ಬಹು ಉಪಯೋಗಕಾರಿ. ರೋಗಿಯ ಶಕ್ತಿಯನ್ನು ಹೆಚ್ಚಿಸುತ್ತದೆ. ಸುಸ್ತು ಕಡಿಮೆ ಮಾಡಿ ಗ್ಲುಕೋಸ್ ಮಟ್ಟವನ್ನ ನಿಯಂತಿಸುತ್ತದೆ. ನಾಲಿಗೆ ರುಚಿ ಕೆಟ್ಟಾಗ ದೇಹಕ್ಕೆ ಬಲ ನೀಡುತ್ತದೆ.
ವಿಧಾನ:
- 10-12 ಒಣದ್ರಾಕ್ಷಿ (ಕಿಷ್ಮಿಷ್) ಚನ್ನಾಗಿ ಜಗಿದು ತಿನ್ನಿ.
- ಅಥವಾ1/2 ಗ್ಲಾಸ್ ನೀರಿನಲ್ಲಿ ನೆನೆಸಿಟ್ಟು ಜಜ್ಜಿ ಮಕ್ಕಳಿಗೆ ಸಿರಪ್ ತಯಾರಿಸಿ ಕುಡಿಯಲು ನೀಡಿ.
- ಅಥವಾ ಒಣದ್ರಾಕ್ಷಿ+ಬಾದಾಮ ಪೇಸ್ಟ್ ಮಾಡಿ ಸೇವಿಸಿ. ಸಕ್ಕರೆ ಬೇಡ, ಜೇನುತುಪ್ಪ ಸ್ವಲ್ಪ ಮಿಶ್ರಣ ಮಾಡಬಹುದು. ಜೇನು ತುಪ್ಪ ಉಷ್ಣ ನೆನಪಿಡಿ
- ಜೇನುತುಪ್ಪವನ್ನು ಬಿಸಿ ಮಾಡಬಾರದು ಇದು ಬಹು ಮುಖ್ಯ.
ಹೆಚ್ಚಿನ ಪ್ರಯೋಜನ: ಒಣದ್ರಾಕ್ಷಿಯು ನೈಸರ್ಗಿಕ ಸಕ್ಕರೆ ಮತ್ತು ಖನಿಜಾಂಶಗಳನ್ನು ಒದಗಿಸುತ್ತದೆ, ಜ್ವರದ ಸಮಯದಲ್ಲಿ ದೇಹಕ್ಕೆ ಶಕ್ತಿ ನೀಡುತ್ತದೆ.