
ನಾಯರ್ ಸರ್ ಅವರನ್ನು ಮರೆಯಲಾಗದು
ಹೊನ್ನಾವರ : ಎಸ್ ಡಿ ಎಂ ಕಾಲೇಜಿನ ದಿನ ನೆನಪಾದಾಗ, ಇಂಗ್ಲೀಷ್ ಪಾಠ ಮಾಡುತ್ತಿದ್ದ ನಾಯರ್ ಸರ್ ನೆನಪಿಗೆ ಬಂದೇ ಬರುತ್ತಾರೆ. ಅವರ ಇಂಗ್ಲೀಷ್ ಶಬ್ದ ಉಚ್ಚಾರವೇ ಆಕರ್ಷಣೆಯಾಗಿದ್ದು, ಪಾಠ ಮಾಡಲು ತಾಳ್ಮೆಯಲ್ಲೂ ಮಾದರಿ.
"ಕೇಳಲು ಮನಸ್ಸಿಲ್ಲ ಅಂದ್ರೆ ನಿದ್ದೆ ಮಾಡಿ, ಏನು ಹೇಳಿಲ್ಲ, ಆದರೆ ಡಿಸ್ಟರ್ಬ್ ಮಾಡಬೇಡಿ" ಎನ್ನುವ ಅವರ ಮಾತುಗಳಿಂದ ಅಂಥ ಪ್ರಾಮಾಣಿಕತೆ ಸ್ಪಷ್ಟವಾಗುತ್ತಿತ್ತು.
ಅವರು ಕಲಿಸಿದ ದಿ ಮರ್ಚೆಂಟ್ ಆಫ್ ವೆನಿಸ್ ಹಾಗೂ ದಿ ಬರ್ಡ್ಸ್ ಎಂಬ ಪಾಠಗಳು ಇನ್ನೂ ಮನಸಿನಲ್ಲಿ ತಾಜಾಗಿ ಉಳಿದಿವೆ.
ಅವರು ಎಸ್ ಡಿ ಎಂ ಕಾಲೇಜಿನಲ್ಲಿ ಪ್ರಾಚಾರ್ಯರಾಗಿಯೂ ಸೇವೆ ಸಲ್ಲಿಸಿದ್ದರು. ಸರಳ ಜೀವನ ಶೈಲಿ, ಶುದ್ಧ ಭಾಷೆ, ಮತ್ತು ವಿದ್ಯಾರ್ಥಿಗಳ ಮೇಲೆ ತಾತ್ವಿಕ ಕಾಳಜಿ ಹೊಂದಿದ ವ್ಯಕ್ತಿತ್ವದ ಮಾದರಿ ಅವರು.
ಸರ್ ನೀವು ಇಲ್ಲ ಎನ್ನುವ ಸುದ್ದಿ ಮನಸ್ಸಿಗೆ ನೋವು ತಂದಿದೆ. ದೇವರು ನಿಮ್ಮ ಆತ್ಮಕ್ಕೆ ಸದ್ಗತಿ ನೀಡಲಿ.
ಗುರುಭ್ಯೋ ನಮಃ - ಎಲ್ಲಿಂದಲೋ ಬಂದವರು, ನಮ್ಮ ಜೀವನದ ಮಾರ್ಗದರ್ಶಕರಾಗಿ ಗುರುವಾಗಿ ಸಿಕ್ಕಿದ್ದು ಅದು ಬದುಕಿನ ವಿಸ್ಮಯ. ಅವರ ನೆನಪನ್ನು ನಮ್ಮಲ್ಲಿ ಉಳಿಸೋಣ.
– ಹಳ್ಳಿ ನ್ಯೂಸ್
ಓಮ್ ಶಾಂತಿ
ಪ್ರತ್ಯುತ್ತರಅಳಿಸಿ